ನಾನಾಗ ನಾಲ್ಕನೇ ತರಗತಿಯಲ್ಲಿದ್ದೆ. ಆವತ್ತು Head Master ಊರಲ್ಲಿರಲಿಲ್ಲ. ನಮ್ಮ ಜಯಮಿಸ್ಸು advantage ತಗೊಂಡು ಕ್ಲಾಸ್ ಬಿಟ್ಟು ಎಲ್ಲೋ ಹೊರ ಹೋಗಿದ್ದರು. ಹೋಗುವಾಗ ಕ್ಲಾಸ್ ಲೀಡರ್ ಬಸವಣ್ಣನಿಗೆ ಯಾರಾದ್ರೂ ಮಾತಾಡಿದ್ರೆ ಅವ್ರು ಬಂದಮೇಲೆ ಹೇಳೋಕೆ ಹೇಳಿದ್ರು. ನಾನು ತುಟಿಮೇಲೆ ಬೆರಳಿಟ್ಟು ತಲೆ ತಗ್ಗಿಸಿ ಕೂತೆ. (ಅದು Madam Instruction!!) ಬಹುಶಃ 1 ಘಂಟೆ ಕೂತಿದ್ದಿರಬಹುದು. ಒಂದೇ angle ನಲ್ಲಿ ಕೈ ಇಟ್ಟು ಕೈ ಎಲ್ಲಾ ನೋವು, ಕುತ್ತಿಗೆ ನೋವು . ಕ್ಲಾಸ್ ತುಂಬಾ ಗಲಾಟೆ. ಅಂತೂ ಜಯಾಮಿಸ್ ಬಂದ್ರು. ಅವರ ಸೀರೆಗೆ ತಕ್ಕ Matching blouse piece ಸಿಕ್ಕಿದ ಸಂತೋಷದಲ್ಲಿದ್ರು. ಬಸವಣ್ಣ ಕೂಗಿ ಕೂಗಿ ಹೇಳಿದ್ದು ಇನ್ನೂ ನೆನಪಿದೆ- "ವಿಸ್, ಕೃಷ್ಣ ಒಬ್ಬನ್ನ ಬಿಟ್ಟು ಎಲ್ರೂ ಮಾತಾಡಿದ್ರು". ಆದ್ರೆ ಮಿಸ್ ಯಾರಿಗೂ ಏನೂ ಮಾಡಲಿಲ್ಲ.
ನನ್ನ ಪ್ರಾಮಾಣಿಕತನಕ್ಕೆ ಅಂದು ಬೆಲೆ ಸಿಗದೇ ಹೋದದ್ದಕ್ಕೆ ಇಂದಿಗೂ ಬೇಸರವಿದೆ. ಆದರೆ ನಾನು ಬದಲಾಗಿಲ್ಲ !!!
Subscribe to:
Post Comments (Atom)
good...
ReplyDelete